11 Jun 2011

ಕಾಲೇಜು ಹಾಗೂ ವಿದ್ಯಾರ್ಥಿಗಳು

  ಕಾಲೇಜು ಹಾಗೂ ವಿದ್ಯಾರ್ಥಿಗಳು
ಪ್ರೌಢ ಶಾಲೆಗಳಲ್ಲಿ ಓದುವ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬಹುದೊಡ್ಡ ಕನಸು ಕಾಲೇಜು, ಇವರಲ್ಲಿ 20ರಷ್ಟು ವಿದ್ಯಾರ್ಥಿಗಳು ಉತ್ತಮ ವಿದ್ಯಾರ್ಜನೆಗಾಗಿ, ಉನ್ನತ ಶಿಕ್ಷಣಕ್ಕಾಗಿ ಕಾಲೇಜಿನ ಕನಸು ಕಂಡರೆ, ಉಳಿದ 80ರಷ್ಟು ವಿದ್ಯಾರ್ಥಿಗಳು ಶಾಲೆಯೆಂಬ ಕೊಂಡಿಯನ್ನು ಕಳಚಿಕೊಂಡು ಸ್ವತಂತ್ರ ಹಕ್ಕಿಗಳಂತಾಗಲು ಕಾಲೇಜುಗಳನ್ನು ಆರಿಸಿಕೊಲ್ಳುವುದು ವಾಸ್ತವ, ಆದರೆ, ಅವರೆಲ್ಲ ಕಾಲೇಜನ್ನು ಮೋಜು-ಮಸ್ತಿಗಾಗಿಯೇ ಆರಿಸಿಕೊಳ್ಳುತ್ತಾರೆಂದು ಹೇಳಲಾಗುವುದಿಲ್ಲ, 80 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಅಂತಹ ಮೋಜು-ಮಸ್ತಿಗಳನ್ನು ಶಿಕ್ಷಣದೊಂದಿಗೆ ಸಮತೋಲನವಾಗಿ ನಿರ್ವಹಿಸಿಕೊಳ್ಳುತ್ತಾರೆ, ಉಳಿದ 30 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳ ಪಾಲಿಗೆ ವಿದ್ಯೆ ನೆವೇದ್ಯ, ಹಾಗೆಂದು ಅವರು ಅಷ್ಟಕ್ಕೆ ನಿಲ್ಲದೆ ಕಷ್ಟಪಟ್ಟಾದರೂ ಓದುತ್ತಾರೆ, ಕೆಲವೊಮ್ಮೆ ಗುರುಗಳ ಬಳಿ 'ಭೇಷ್' ಎನ್ನಿಸಿಕೊಳ್ಳುವುದೂ ಉಂಟು, ಉಳಿದ 10 ವಿದ್ಯಾರ್ಥಿಗಳು ತಮ್ಮನನ್ನು ತಾವು 'ಅಹಂ Downಆಸ್ಮಿ, ಅಹಂ Leaderಆಸ್ಮಿ, ಅಹಂ Heroಆಸ್ಮಿ, ಅಹಂ Miss Collegeಆಸ್ಮಿ, ಅಹಂ Quineಆಸ್ಮಿ' ಎಂಬ ಭಾವನೆಯಲ್ಲಿ ಇಡೀ ಕಾಲೇಜಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ಹೆಣಗಾಡುತ್ತಾರೆ, ಕೆಲವರು ಉತ್ತಮ ಮಾರ್ಗಗಳಲ್ಲಿ ಗುರುತಿಸಿಕೊಂಡರೆ, ಕೆಲವರು ಹಾದಿ ತಪ್ಪುತ್ತಾರೆ.
ಈ ಮೇಲಿನ ವಿದ್ಯಾರ್ಥಿಗಳ ವರ್ಗೀಕರಣದ ಅವಶ್ಯವಾದರೂ ಏನು? ಎಂಬ ಪ್ರಶ್ನೆಗೆ, ಇಂತಹ ವರ್ಗೀಕರಣದ ಹೊರತಾಗಿ ಕಾಲೇಜುಮಟ್ಟದಲ್ಲಿ ಸ್ನೇಹಿತರ ಪ್ರಭಾವ ಹಾಗೂ ಅವರ ಅವಶ್ಯಕತೆಯನ್ನು ವಿವರಿಸಲು ಸಾಧ್ಯವಾಗಲಾರದು. ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ಅದರಲ್ಲೂ ಪದವಿ ಮಟ್ಟದ ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಪಡೆಯುವ ಅನುಭವ, ಅವನ ಮುಂದಿನ ಜೀವನಕ್ಕೆ ಅತ್ಯಂತ ಸಹಕಾರಿ ಹಾಗೂ ಮಾರ್ಗದರ್ಶನಕರ ಎಂದರೆ ಬಹುಶಃ ತಪ್ಪಾಗಲಾರದು, ಇದನ್ನು ಪ್ರತಿಯೊಬ್ಬರು ಒಪ್ಪಲೇಬೇಕಾಗುತ್ತದೆ. ಅಂತಹ ಅನುಭವಗಳನ್ನು ಸ್ನೇಹಿತರ ಗುಂಪಿನಿಂದ ಪಡೆಯುವುದೇ ಹೆಚ್ಚು, ಪ್ರತಿಯೊಬ್ಬ ವಿದ್ಯಾರ್ಥಿಯು ಮತ್ತೊಬ್ಬ ವಿದ್ಯಾರ್ಥಿಗೆ ಸ್ನೇಹಿತನಾಗಿರುತ್ತಾನೆ, ಹೀಗೆ ಸ್ನೇಹಿತರ ಕೊಂಡಿ ಎಲ್ಲಿಯವರೆಗೂ ಬೆಸೆದುಕೊಂಡಿರುತ್ತದೆ ಎಂದರೆ ಆ ಕೊಂಡಿಯನ್ನು ಹುಡುಕುತ್ತಾ ಹೋದರೆ ಇಡೀ ಕಾಲೇಜು ವಿದ್ಯಾರ್ಥಿಗಳೆಲ್ಲ ಆ ಕೊಂಡಿಯಲ್ಲಿ ಬಂಧಿಸಲ್ಪಡುತ್ತಾರೆ, ಇದರಿಂದಾಗಿಯೇ ಕಾಲೇಜನ್ನು 'ಸ್ನೇಹಿತರ ಸಂಬಂಧಗಳ ಒಂದು ಜಾಲ' ಎಂದು ವ್ಯಾಖ್ಯಾನಿಸಲು ಸಾಧ್ಯ. ಈ ಸಂಬಂಧಗಳೆ ವಿದ್ಯಾರ್ಥಿಗಳ ಮಾನಸಿಕ, ಭೌದ್ಧಿಕ ಬೆಳವಣಿಗೆಗೆ ಅತ್ಯಂತ ಸಹಾಕಾರಿಯಾಗುತ್ತದೆಯಾದರೂ ಕೆಲವೊಮ್ಮೆ ಅದೇ ಸಂಬಂಧಗಳು ವಿದ್ಯಾರ್ಥಿಗಳನ್ನು ಹಾಳುಗೆಡಹುವಂತೆ ಮಾಡುತ್ತದೆ. ಯಾವನೋ ಒಬ್ಬ ಸ್ನೇಹಿತನ ತಪ್ಪಿನಿಂದಾಗಿ ಆ ಇಡೀ ನಾಲ್ಕೈದು ಸ್ನೇಹಿತರ ಗುಂಪೆ ಶಿಕ್ಷೆಗೆ ಒಳಪಡಬಹುದು, ಅಂತಹ ಅನುಭವ ಪ್ರತಿಯೊಬ್ಬರು ಅನುಭವಿಸಿರುತ್ತಾರೆ ಎಂಬುದು ಭಾಗಶಃ ನನ್ನ ಆಲೋಚನೆ.
ದಡ್ಡನೆಂದು ಕರೆಸಿಕೊಳ್ಳುವ ವಿದ್ಯಾರ್ಥಿಯು ಒಂದೇ ಬಾರಿಗೆ ಬುದ್ಧಿವಂತನಾಗುವುದು, ಬುದ್ಧಿವಂತ ವಿದ್ಯಾರ್ಥಿಯು ಹಾದಿ ತಪ್ಪುವುದು, ಇಂತಹ ನಡವಳಿಕೆಗಳ ಮೂಲ ಅಡಿಪಾಯ ಸ್ನೇಹಿತರ ಗುಂಪಿನಲ್ಲಿ ನಡೆಯುವ ಉತ್ತೇಜಕಗಳು ಹಾಗೂ ನಿರುತ್ತೇಜಕಗಳೆ ಕಾರಣಗಳು. ಸಮವಯಸ್ಕರ ಗುಂಪುಗಳು ಎಂಬ ಪರಿಕಲ್ಪನೆ ಇಲ್ಲಿ ಕಾರ್ಯ ನಿರ್ವಹಿಸಲು ಶುರುಮಾಡುತ್ತದೆ. ತಮ್ಮ ಪೋಷಕರು, ಶಿಕ್ಷಕರಿಗಿಂತ ಹೆಚ್ಚಾಗಿ ನಂಬುವ ಸ್ನೇಹಿತರ ಬಳಿ ಪ್ರತಿಯೊಂದು ವಿಷಯಗಳ ಬಗ್ಗೆ ಮುಕ್ತ ಚರ್ಚೆ ನಡೆಯುತ್ತದೆ, ಬೇರೆ ಯಾವ ಸಂಸ್ಥೆಯಿಂದಲೂ ನೀಡಲಾಗದ ಅಮೂಲ್ಯ ಶಿಕ್ಷಣವು ಇಂತಹ ಸಮವಯಸ್ಕ ಸ್ನೇಹಿತರ ಗುಂಪಿನಲ್ಲಿ ಪ್ರಾಪ್ತವಾಗುತ್ತದೆ ಎಂಬುದು ಸಮಾಜಶಾಸ್ತ್ರೀಯ ನೆಲೆಯಿಂದಲೂ ಖಾತ್ರಿಯಾಗಿದೆ. ಮನೆಗಳಲ್ಲಿ ಮಗ ಅಥವಾ ಮಗಳು ಯಾವುದೇ ದುಶ್ಚಟಗಳಿಗೆ ಒಳಗಾಗಿದ್ದಲ್ಲಿ ಮೊದಲು ಅದಕ್ಕೆಲ್ಲ ಕಾರಣ ಸ್ನೇಹಿತರೆ ಎಂಬ ಖಚಿತ ನಿಲುವು ಸ್ನೇಹಿತರ ಬಗೆಗಿನ ಪೋಷಕರ ತಿರಸ್ಕಾರತೆಯನ್ನು ತಿಳಿಸುತ್ತದೆ, ಆದರೆ ಯಾವುದೇ ವಿದ್ಯಾರ್ಥಿಯ ಅವನತಿಯಲ್ಲಿ ತೆಗಳಿಕೆಗೆ ಒಳಗಾಗುವ ಸ್ನೇಹಿತರು, ಅವರ ಉನ್ನತಿಯಲ್ಲಿ ಮರೆಯಾಗಿಬಿಡುತ್ತಾರೆ, ಆಗ ಸ್ನೇಹಿತರನ್ನು ಗುರುತಿಸುವ ಯಾವುದೇ ಪ್ರಯತ್ನಗಳು ನಡೆಯುವುದಿಲ್ಲ. ಆದರೆ, ವಿದ್ಯಾರ್ಥಿಗಳ ಯಶಸ್ಸು ಹಾಗೂ ಅವನತಿ ಎರಡರಲ್ಲೂ ಸ್ನೇಹಿತರ ಪಾತ್ರ ಇದ್ದೇ ಇರುತ್ತದೆ.
ಈ ಹಿಂದೆ ತಿಳಿಸಿದ ವರ್ಗೀಕರಣದಲ್ಲಿ ಯಶಸ್ಸಿನ ಮೂಟೆಯನ್ನು ತಮ್ಮ ಹೆಗಲಿಗೆ ಕಟ್ಟಿಕೊಂಡು ಮುನ್ನಡೆಯುವವರು ಮೊದಲನೇ ಗುಂಪಿನ ವಿದ್ಯಾರ್ಥಿಗಳು, ಅದೇ ರೀತಿ ಸಿಹಿ-ಕಹಿ ಎರಡನ್ನೂ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವವರು 50ರಷ್ಟು ವಿದ್ಯಾರ್ಥಿಗಳು, ಹೇಗಾದರೂ ಮಾಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವವರು 3ನೇ ವರ್ಗದ 20ರಷ್ಟು ವಿದ್ಯಾರ್ಥಿಗಳು, ಇನ್ನು ಕೊನೆಯ 10ರಷ್ಟು ವಿದ್ಯಾರ್ಥಿಗಳು ಮೋಜು-ಮಸ್ತಿಯಲ್ಲಿ ಮುಳುಗಿ ಯಶಸ್ಸಿನ ಬಾಗಿಲಿಗೆ ಬೀಗ ಬಿಗಿದು ತಾವಾಗಿಯೇ ಬೀಗದ ಕೈಯನ್ನು ಕಳೆದುಕೊಳ್ಳುತ್ತಾರೆ, ಇತ್ತೀಚಿನ ದಿನಗಳಲ್ಲಿ ಅಂತಹ ಕೊನೆಯ ವರ್ಗದ ವಿದ್ಯಾರ್ಥಿಗಳ ಸಂಖ್ಯಾ ಪ್ರಮಾಣವು ಗಂಭೀರ ಪ್ರಮಾಣದಲ್ಲಿ ವೃದ್ಧಿಯಾಗುತ್ತಿರುವುದು ತುಸು ಆಲೋಚಿಸಲೇ ಬೇಕಾದ ಸಂಗತಿ. ಆಧುನಿಕತೆಯ ಸೆಳತಕ್ಕೆ ಸಿಲುಕಿ ಎಲ್ಲವನ್ನೂ ಅಲ್ಪಾವಧಿಯಲ್ಲೇ ಅನುಭವಿಸಬೇಕೆಂಬ ಕಾತರತೆಯು ಇಂತಹ ವಿದ್ಯಾರ್ಥಿಗಳನ್ನು ಹಾದಿ ತಪ್ಪುವಂತೆ ಮಾಡುತ್ತಿವೆ, ಮೌಲ್ಯರಹಿತ ಶಿಕ್ಷಣ ಪದ್ಧತಿ, ನೈತಿಕತೆಯನ್ನು ಬೆಳೆಸದ ಸಮಾಜ, ಕಾಲೇಜುಗಳ ಅತಿ ಕಠಿಣ ನಿಯಮಗಳು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗೆಗಿನ ಒಲವನ್ನು ಕಳೆದು ಕೊಳ್ಳುವಂತೆ ಮಾಡುತ್ತಿವೆ. ಎಂಟ್ಹತ್ತು ಜನರ ಸ್ನೇಹಿತರ ಗುಂಪುಳ್ಳ ಸಮೂಹಗಳು ತಮ್ಮ ಅಮೂಲ್ಯವಾದ ಕ್ಷಣಗಳನ್ನು ಮರೆತು, ಸಮಯವನ್ನು ಹಾಳುಗೆಡಹುತ್ತಿದ್ದಾರೆ, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಹೇರಳ ಪ್ರಮಾಣದಲ್ಲಿ ವಿದ್ಯಾಥರ್ಿಗಳಿಗೆ ಮೌಲ್ಯಯುತ ಶಿಕ್ಷಣ ಹಾಗೂ ನೈತಿಕ ಶಿಕ್ಷಣದ ಅವಶ್ಯಕತೆಯನ್ನು ಕುರಿತಾದ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೆ.
ಗಲ್ಲಿಗೊಂದರಂತೆ ತೆರೆದುಕೊಳ್ಳುತ್ತಿರುವ ಬಾರ್ಗಳು, ಹುಕ್ಕಾ ಪಾರ್ಲರ್ಗಳು, ಸ್ಮೋಕಿಂಗ್ ಕಾರ್ನರ್ಗಳು, ಪಬ್ಗಳು, ದುಬಾರಿ ಬೆಲೆಯ ಹೋಟೆಲ್ಗಳು ಸಾಕಷ್ಟು ಪ್ರಮಾಣದ ವಿದ್ಯಾರ್ಥಿಗಳ ಸಮಯವನ್ನು ನುಂಗಿ ಹಾಕುತ್ತಿವೆ. ಕೆಲವೊಂದು ಸ್ನೇಹಿತರ ಗುಂಪುಗಳು ಸಾಕಷ್ಟು ಸಮಯವನ್ನು ಅಂತಹ ಸ್ಥಳಗಳಲ್ಲಿ ಕಳೆಯುವುದು ಆಗಾಗ ನಮ್ಮ ಗಮನಕ್ಕೂ ಬರುತ್ತಿರುತ್ತವೆ. ಯಾವನೋ ಒಬ್ಬ ವಿದ್ಯಾರ್ಥಿ ಆ ಚಟವನ್ನು ಮೈಗೂಡಿಸಿಕೊಂಡದ್ದೇ ಆದರೆ ಆತನು ತನ್ನ ಇತರ ಸ್ನೇಹಿರತನ್ನೂ ಸಹ ಅವನಲ್ಲಿಗೆ ಸೆಳೆಯುತ್ತಾನೆ, ಒಬ್ಬನಿಂದ ಇಬ್ಬರು, ಇಬ್ಬರಿಂದ ನಾಲ್ವರು ಹೀಗೆ ವಿದ್ಯಾರ್ಥಿಗಳು ಸೆಳೆಯಲ್ಪಡುತ್ತಾರೆ, ಹಾಗಾದರೆ ವಿದ್ಯಾರ್ಥಿಗಳು ಅರ್ಥಾತ್ ಸ್ನೇಹಿತರ ಗುಂಪುಗಳು ನೈತಿಕತೆಯನ್ನು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲವೆ? ಎಂಬ ಪ್ರಶ್ನೆಗೆ 'ಸಾಧ್ಯ' ಎಂಬ ಸರಳ ಉತ್ತರವನ್ನೇ ನೀಡಬಹುದು. ಮೊದಲನೆಯದಾಗಿ ವಿದ್ಯಾರ್ಥಿಗಳಲ್ಲಿ ಭೌದ್ಧಿಕ ದಾಹ, ವಿಷಯಗಳ ಕ್ರೋಢಿಕರಣದ ದಾಹ, ಹೆಚ್ಚಾಗಬೇಕು, ವಿಷಯಗಳ ಬಗೆಗೆ ಆಳವಾದ ಜ್ಞಾನದ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಲ್ಳಬೇಕು, ಎರಡನೆಯದಾಗಿ ಆಕರ್ಷಣೆಗೆ ಒಳಗಾಗಿ ಅವನ್ನೆಲ್ಲ ಪಡೆಯಬೇಕೆಂಬ ಮನೋಭಾವ, ಅನುಭವಿಸಿ ತೀರಬೇಕೆಂಬ  ಪೂರ್ವಾಲೋಚನೆ ರಹಿತ ದೃಷ್ಠಿಕೋನ ಬದಲಾಗಬೇಕು, ಮೂರನೆಯದಾಗಿ ಸ್ನೇಹಿತರ ನಡುವೆ ಮೋಜು-ಮಸ್ತಿಯ ಅರುಹು ಕಡಿಮೆಯಾಗಬೇಕು, ಒಬ್ಬನು ಮತ್ತೊಬ್ಬನನ್ನು ಆಕರ್ಷಿಸುವ ಮನೋಭಾವಗಳು ಬದಲಾಗಬೇಕು, ನಾಲ್ಕನೆಯದಾಗಿ ಕಾಲೇಜಿನ ಕಠಿಣ ನಿಯಮಗಳು ಅಲ್ಪವಾದರೂ ಸಡಿಲಗೊಂಡು ವಿದ್ಯಾರ್ಥಿಗಳು ಇನ್ನಾದರು ತರಿಗತಿಗಳಿಗೆ ಉತ್ಸಾಹದಿಂದ ಹಾಜರಾಗುವಂತೆ ಮಾಡಬೇಕು, ಪೋಷಕರು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು, ಇನ್ನೂ ಕೊನೆಯದಾಗಿ ಸರ್ಕಾರವು ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ಏಳುತ್ತಿರುವ ಮೋಜು-ಮಸ್ತಿ ಕೇಂದ್ರಗಳನ್ನು ನಿಯಂತ್ರಿಸಬೆಕು, ಇವೆಲ್ಲಸಾಧ್ಯವಾದದ್ದೇ ಆದರೆ ವಿದ್ಯಾರ್ಥಿಗಳಲ್ಲಿ ನೈತಿಕತೆ ಬೆಳೆಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ, ಅದೇನೇ ಆದರೂ ಕಾಲೇಜು ಮಟ್ಟದ ವಿದ್ಯಾರ್ಥಿಗಳ ಆಲೋಚನೆಗಳು ಅವರು ಪಡೆಯುವ ಸ್ನೇಹಿತ ಸಮೂಹವನ್ನು ಅವಲಂಭಿಸಿರುತ್ತದೆ, ಆ ಸಮೂಹ ಹೇಗೆ ಆಡಿಸುತ್ತದೋ ಹಾಗೆ ವಿದ್ಯಾಥರ್ಿಯು ಕುಣಿಯುತ್ತಾನೆ, ಕುಣಿಸುವವನು ತಪ್ಪಿಲ್ಲದಂತೆ ಕುಣಿಸಿದರೆ, ಕುಣಿಯುವವನು ತಪ್ಪಿಲ್ಲದೆ ಕುಣಿಯುತ್ತಾನೆ.

ಸುರೇಶ್ ಕುಮಾರ್.ಎಂ.ಆರ್.
ಅಂತಿಮ ಬಿ.ಎ. (ಎಸ್.ಇ.ಕೆ.)
ನ್ಯಾಷನಲ್ ಪದವಿ ಕಾಲೇಜು(ಸ್ವಾಯತ್ತ).
ಬಸವನಗುಡಿ, ಬೆಂಗಳೂರು

No comments:

Post a Comment